
ಹನೂರು : ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವಂತೆ ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಧರಣಿ71 ನೇ ದಿನಕ್ಕೆ ಕಾಲಿಟ್ಟಿದ್ದು, ನಿರಂತರ ಹೋರಾಟ ಮಾಡುತ್ತಿದ್ದಾರೆ.
ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದರಲ್ಲೂ ಸಹ ಮಾರ್ಟಳ್ಳಿ ಮುಖ್ಯ ರಸ್ತೆಯಲ್ಲಿಇರುವಂತಹ ಮಧ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ಸ್ಥಳೀಯರು ಹಾಗೂ ಪಾಲಿಮೇಡುಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಂತರ ಪ್ರತಿಭಟನಾಕಾರರು ಮಾತನಾಡಿ ಮಧ್ಯದ ಅಂಗಡಿಗಳನ್ನ ಬೇರೆ ವರ್ಗಾವಣೆ ಮಾಡದೆ ಕನಿಷ್ಠಮುಖ್ಯರಸ್ತೆಯಿಂದ 100 ಮೀಟರ್ ಅಂತರದಲ್ಲಿ ಒಳಭಾಗಕ್ಕೆ ವರ್ಗಾವಣೆ ಮಾಡಿ ಎಂದು ನಮ್ಮಕೋರಿಕೆಯಾಗಿದೆ.ಜೊತೆಗೆ ರಸ್ತೆಬದಿಯಲ್ಲೇ ಇರುವ ಮಧ್ಯದ ಅಂಗಡಿಗಳಿಂದ ಈಗಾಗಲೇ ಸಾಕಷ್ಟುಅನಾಹುತಗಳನ್ನು ಕಣ್ಣಾರೆ ನೋಡುತ್ತಿದ್ದೇವೆ.ಅನೇಕರೂ ಕುಡಿದು ರಸ್ತೆಯಲ್ಲಿಯೇ ಮಲಗುತ್ತಿದ್ದೂ ಶಾಲಾ ಮಕ್ಕಳಿಗೆತೊಂದರೆ ಉಂಟಾಗುತ್ತದೆ. ಜೊತೆಗೆ ಈಗಾಗಲೇ ಅಪಘಾತವಾಗಿದೆ. ಗಲಾಟೆಯಾಗಿದೆ. ಆದರೂ ಸಹ ಇದುವರೆಗೂಮಧ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡಲು ಕ್ರಮ ವಹಿಸುತ್ತಿಲ್ಲ ಎಂಬುದು ಪ್ರತಿಭಟನ ಕಾರರ ಆರೋಪವಾಗಿದೆ.
ಅಪಘಾತ, ಗಲಾಟೆ : ಮಧ್ಯದ ಅಂಗಡಿಗಳ ಸನಿಹವೇ ಸಾಕಷ್ಟು ಪ್ರಮಾಣದಲ್ಲಿ ದಿನನಿತ್ಯ ಒಂದಲ್ಲ ಒಂದುಗಲಾಟೆಗಳು, ಅಪಘಾತಗಳು, ಕೆಲವರಿಂದ ಅಸಭ್ಯ ವರ್ತನೆಗಳು ಒಂದಲ್ಲ ಒಂದು ನಡೆಯುತ್ತಿದ್ದು, ಈ ವಿಷಯವಾಗಿಚಿತ್ರ ಸಹಿತ ಅಧಿಕಾರಿಗಳಿಗೆ ಮನವಿ ಮಾಡಲಿದ್ದು ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳಿಗೆ ಕಡಿವಾಣ ಹಾಕುವಮೂಲಕ ಮಧ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವರೆ ಅಧಿಕಾರಿಗಳು ಕಾದು ನೋಡಬೇಕಾಗಿದೆ.
ಅಧಿಕಾರಿಗಳಿಗೆ ಮನವಿ : ಮಧ್ಯದ ಅಂಗಡಿ ಸ್ಥಳಾಂತರ ಮಾಡುವಂತೆ ಈಗಾಗಲೇ ಸಂಬಂಧಪಟ್ಟ ಇಲಾಖೆಯಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದು,. ಜಿಲ್ಲಾಧಿಕಾರಿ ಸಹಿತವಾಗಿ ಉಪವಿಭಾಗಾಧಿಕಾರಿ ಸಹಿತವಾಗಿ ವಿಷಯತಿಳಿಸಿದ್ದು, ಅದರಲ್ಲೂ ಹನೂರು ತಾಲೂಕು ದಂಡಾಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿಮನವಿಯನ್ನು ಸ್ವೀಕರಿಸಿದ್ದಾರೆ. ಆದರೆ ಇವರೆಗೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಮುಂದಾದರು ಕ್ರಮಕೈಗೊಳ್ಳುವರೇ ಕಾದು ನೋಡಬೇಕಿದೆ.
ಇದೆ ಸಂದರ್ಭದಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಥಳೀಯ ನಿವಾಸಿಗಳು ಮಹಿಳೆಯರುಉಪಸ್ಥಿತರಿದ್ದರು.
ಚಿತ್ರ : ಮದ್ಯದ ಅಂಗಡಿ ಸಮೀಪವೇ ರಸ್ತೆಯಲ್ಲಿ ಕುಡಿದು ಬಿದ್ದಿರುವ ವ್ಯಕ್ತಿ
