ಜಿಲ್ಲೆ

153 ದಿನಗಳ ರೈತ ಸಂಘಟನೆ ವತಿಯಿಂದ ನಡೆಯುತ್ತಿದ್ದ ಅಹೋ ರಾತ್ರಿ ಧರಣಿ ಕೊನೆಗೂ ಅಂತ್ಯ….!

ಹನೂರು :- ದಂಟಳ್ಳಿ ಮಾರ್ಗ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಕಳೆದ 153 ದಿನಗಳಿಂದ ನಡೆಯುತ್ತಿದ್ದ ರೈತರಅಹೋ ರಾತ್ರಿ ಧರಣಿ ಪ್ರತಿಭಟನೆಯನ್ನು ಶಾಸಕ ಎಂ. ಆರ್ ಮಂಜುನಾಥ್ ರವರು ರೈತರ ಮನವೊಲಿಸಿದ್ದ ಹಿನ್ನೆಲೆಶನಿವಾರ ಪ್ರತಿಭಟನೆಗೆ ಅಂತ್ಯ ನಾಂಧಿ ಹಾಡಲಾಯಿತ್ತು. ತಾಲೂಕಿನ ವಡಕೆಹಳ್ಳ ಗ್ರಾಮದಲ್ಲಿ ದಂಟಳ್ಳಿ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯರೈತ ಸಂಘಟನೆ ವತಿಯಿಂದ ನಡೆಯುತ್ತಿದ್ದ ಅಹೋ ರಾತ್ರಿ ಧರಣಿ ಕೊನೆಗೂ ಅಂತ್ಯಗೊಂಡಿದೆ. ಬಳಿಕ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್ ಹನೂರು ವಿಧಾನ ಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದುಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆ. ಜೊತೆಗೆ ರಸ್ತೆಗಳು, ಸೇತುವೆಗಳು, ಹಾಗೂ ನೀರಾವರಿ ಯೋಜನೆಗೆ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಅಲ್ಲದೇ ಕುಡಿಯುವ ನೀರು ಯೋಜನೆ ಸಂಬಂಧಪಟ್ಟಂತೆ ಈಗಾಗಲೇ ರಾಮನ ಗುಡ್ಡ ಕೆರೆಗೆ ನೀರು ತುಂಬಿದ್ದು ಮುಂದುವರೆದ ಭಾಗವಾಗಿ ಅನೇಕ ಹಳ್ಳಿಗಳಿಗೆಹಳ್ಳದಲ್ಲಿ ನೀರು ಹರಿದು ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಸುಮಾರು 490 ಕೋಟಿರೂ ವೆಚ್ಚದಲ್ಲಿ ಉಡುತೊರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಲು ಮುಖ್ಯ ಮಂತ್ರಿಗಳುಅನುಮೋದನೆ ನೀಡಿದ್ದಾರೆ.  ಹಾಗಾಗಿ ಆ ಜಲಾಶಯಕ್ಕೆ ಕಾವೇರಿ ನೀರು ಬಂದರೆ ಖಂಡಿತ ಮಾರ್ಟಳ್ಳಿ, ರಾಮಾಪುರ, ಕೌದಳ್ಳಿ ಶೆಟ್ಟಳ್ಳಿ ಕುರಟ್ಟಿಹೊಸೂರು ಭಾಗದ ಜನರಿಗೆ ಹಾಗೂ ರೈತಾಪಿ ವರ್ಗಕ್ಕೆ ಅನುಕೂಲ ಆಗಲಿದೆ. ಈಗಾಗಲೇ ಮಾರ್ಟಳ್ಳಿ ಭಾಗದಲ್ಲಿಇರುವಂತಹ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಸಾಕಷ್ಟು ಯೋಜನೆ ಸಿದ್ದಪಡಿಸಿದ್ದು ಖಂಡಿತ ನಿಮಗೆ ನೀರಾವರಿಸೌಲಭ್ಯ ಒದಗಿಸಿಯೇ ತಿರುತ್ತೇನೆ ಎಂದರು. ಇದೆ ಸಮಯದಲ್ಲಿ ವಡಕ್ಕೆ ಹಳ್ಳ ಫಾಥರ್ ಡಾ ಸಿಲುವೈನಾಥ್,ಬಿದರಲ್ಲಿ ಫಾಥರ್,ಸಿಸ್ಟರ್ಸೇಲ್ವಮೇರಿ,ಸೈಲೆಂದ್ರ,ಸಯ್ಯದ್ ಉಲ್ಲಾ, ಬಸವರಾಜು, ಬೆಟ್ಟಣ್ಣ,ಮಾರ್ತಾಳ್ಳಿ ಘಟಕದ ಅಧ್ಯಕ್ಷ ರಾದ ಅರ್ಪುದರಾಜು,ರಾಜಶೇಖರ್,ಹಾಗೂ ಇನ್ನಿತರ ರೈತ ಮುಖಂಡರುಗಳು ಇದ್ದರು..

ಮದ್ಯದ ಅಂಗಡಿಯನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರ ಆಗ್ರಹ…!

ಹನೂರು : ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವಂತೆ ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಧರಣಿ71 ನೇ ದಿನಕ್ಕೆ ಕಾಲಿಟ್ಟಿದ್ದು, ನಿರಂತರ ಹೋರಾಟ ಮಾಡುತ್ತಿದ್ದಾರೆ.  ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದರಲ್ಲೂ ಸಹ ಮಾರ್ಟಳ್ಳಿ ಮುಖ್ಯ ರಸ್ತೆಯಲ್ಲಿಇರುವಂತಹ ಮಧ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ಸ್ಥಳೀಯರು ಹಾಗೂ ಪಾಲಿಮೇಡುಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.  ನಂತರ ಪ್ರತಿಭಟನಾಕಾರರು ಮಾತನಾಡಿ ಮಧ್ಯದ ಅಂಗಡಿಗಳನ್ನ ಬೇರೆ ವರ್ಗಾವಣೆ ಮಾಡದೆ ಕನಿಷ್ಠಮುಖ್ಯರಸ್ತೆಯಿಂದ 100 ಮೀಟರ್ ಅಂತರದಲ್ಲಿ ಒಳಭಾಗಕ್ಕೆ ವರ್ಗಾವಣೆ ಮಾಡಿ ಎಂದು ನಮ್ಮಕೋರಿಕೆಯಾಗಿದೆ.ಜೊತೆಗೆ ರಸ್ತೆಬದಿಯಲ್ಲೇ ಇರುವ ಮಧ್ಯದ ಅಂಗಡಿಗಳಿಂದ ಈಗಾಗಲೇ ಸಾಕಷ್ಟುಅನಾಹುತಗಳನ್ನು ಕಣ್ಣಾರೆ ನೋಡುತ್ತಿದ್ದೇವೆ.ಅನೇಕರೂ ಕುಡಿದು ರಸ್ತೆಯಲ್ಲಿಯೇ ಮಲಗುತ್ತಿದ್ದೂ ಶಾಲಾ ಮಕ್ಕಳಿಗೆತೊಂದರೆ ಉಂಟಾಗುತ್ತದೆ. ಜೊತೆಗೆ ಈಗಾಗಲೇ ಅಪಘಾತವಾಗಿದೆ. ಗಲಾಟೆಯಾಗಿದೆ. ಆದರೂ ಸಹ ಇದುವರೆಗೂಮಧ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡಲು ಕ್ರಮ ವಹಿಸುತ್ತಿಲ್ಲ ಎಂಬುದು ಪ್ರತಿಭಟನ ಕಾರರ ಆರೋಪವಾಗಿದೆ. ಅಪಘಾತ, ಗಲಾಟೆ : ಮಧ್ಯದ ಅಂಗಡಿಗಳ ಸನಿಹವೇ ಸಾಕಷ್ಟು ಪ್ರಮಾಣದಲ್ಲಿ ದಿನನಿತ್ಯ ಒಂದಲ್ಲ ಒಂದುಗಲಾಟೆಗಳು, ಅಪಘಾತಗಳು, ಕೆಲವರಿಂದ ಅಸಭ್ಯ ವರ್ತನೆಗಳು ಒಂದಲ್ಲ ಒಂದು ನಡೆಯುತ್ತಿದ್ದು, ಈ ವಿಷಯವಾಗಿಚಿತ್ರ ಸಹಿತ ಅಧಿಕಾರಿಗಳಿಗೆ ಮನವಿ ಮಾಡಲಿದ್ದು ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳಿಗೆ ಕಡಿವಾಣ ಹಾಕುವಮೂಲಕ ಮಧ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವರೆ ಅಧಿಕಾರಿಗಳು ಕಾದು ನೋಡಬೇಕಾಗಿದೆ. ಅಧಿಕಾರಿಗಳಿಗೆ ಮನವಿ : ಮಧ್ಯದ ಅಂಗಡಿ ಸ್ಥಳಾಂತರ ಮಾಡುವಂತೆ ಈಗಾಗಲೇ ಸಂಬಂಧಪಟ್ಟ ಇಲಾಖೆಯಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದು,. ಜಿಲ್ಲಾಧಿಕಾರಿ ಸಹಿತವಾಗಿ ಉಪವಿಭಾಗಾಧಿಕಾರಿ ಸಹಿತವಾಗಿ ವಿಷಯತಿಳಿಸಿದ್ದು, ಅದರಲ್ಲೂ ಹನೂರು ತಾಲೂಕು ದಂಡಾಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿಮನವಿಯನ್ನು ಸ್ವೀಕರಿಸಿದ್ದಾರೆ. ಆದರೆ ಇವರೆಗೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಮುಂದಾದರು ಕ್ರಮಕೈಗೊಳ್ಳುವರೇ ಕಾದು ನೋಡಬೇಕಿದೆ. ಇದೆ ಸಂದರ್ಭದಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಥಳೀಯ ನಿವಾಸಿಗಳು ಮಹಿಳೆಯರುಉಪಸ್ಥಿತರಿದ್ದರು. ಚಿತ್ರ : ಮದ್ಯದ ಅಂಗಡಿ ಸಮೀಪವೇ ರಸ್ತೆಯಲ್ಲಿ ಕುಡಿದು ಬಿದ್ದಿರುವ ವ್ಯಕ್ತಿ

ವನ್ಯ ಪ್ರಾಣಿ ದಾಳಿಗೆ ಸಾಕು ಪ್ರಾಣಿ ಬಲಿ…!

ಹನೂರು :- ವನ್ಯಪ್ರಾಣಿ ದಾಳಿಗೆ ಹಸುಯೊಂದು ಬಲಿಯಾಗಿರುವ ಘಟನೆ ಕಳ್ಳಿದೊಡ್ಡಿ ಸಮೀಪದಲ್ಲಿ ಜರುಗಿದ್ದು ಶುಕ್ರವಾರತಡವಾಗಿ ಬೆಳಕಿಗೆ ಬಂದಿದೆ.  ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳಿದೊಡ್ಡಿ ಗ್ರಾಮದ ಅಂಕಪ್ಪ ಬಿನ್ ಸಣ್ಣನಾಯಕಸೇರಿದ ಹಸು ಎಂದು ಗುರುತಿಸಲಾಗಿದೆ. ಎಂದಿನಂತೆ ಶನಿವಾರ ಕಳ್ಳಿದೊಡ್ಡಿ ಗ್ರಾಮದ ಜಮೀನಿನಲ್ಲಿ ಮೇವುಮೇಯಲು ಹಸು ಬಿಟ್ಟಿದ್ದರು. ಅಂಕಪ್ಪ ಸಾಕಿದ ನಾಟಿ ಹಸಿವಿನ ಹೊರಿಯನ್ನು ಸಂಜೆ ವೇಳೆ ಚಿರತೆ ದಾಳಿ ಮಾಡಿಕೊಂದು ಹಾಕಿದೆ ಎಂದು ರೈತ ಆರೋಪಿಸಿದ್ದಾರೆ. ದಾಳಿಗೆ ಒಳಗಾದ ಹೋರಿಯ ಕತ್ತಿನ ಭಾಗ ಹಿಂಭಾಗದಲ್ಲಿಗಾಯಗೊಂಡಿದ್ದು ರಕ್ತ ಕಲೆ ಹೊಂದಿದೆ. ಇದರ ಬೆಲೆ ಸುಮಾರು 60 ಸಾವಿರಕ್ಕೆ ಬಾಳುತ್ತಿತ್ತು ಇದೀಗ ಹೋರಿಇಲ್ಲವಾಗಿದೆ ಎಂದು ರೈತ ತಮ್ಮ ಅಳಲುನ್ನು ತೋಡಿಕೊಂಡಿದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆಚಿರತೆ, ವನ್ಯಪ್ರಾಣಿಗಳ ದಾಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.  ಈ ಘಟನೆ ಸಂಬಂಧ ಹನೂರು ಕಾವೇರಿ ವನ್ಯಜೀವಿ ಧಾಮ ವಲಯ ಕಳ್ಳಿದೊಡ್ಡಿ ಬೀಟ್ ಅರಣ್ಯ ಇಲಾಖೆ ಸಿಬ್ಬಂದಿಮಲ್ಲಿಕಾರ್ಜುನ, ವಿವೇಕ್ ಅವರು ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಬಳಿಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿಎಂದು ಸಿಬ್ಬಂದಿಗಳು ನಾಟಿದನದ ಮಾಲೀಕರಿಗೆ ತಿಳಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ

ಜಾನುವಾರುಗಳಿಗೆ ಚರ್ಮಗಂಟು ರೋಗದ ಲಸಿಕೆ…!

ಹನೂರು :- ಜಾನುವಾರುಗಳಿಗೆ ಚರ್ಮಗಂಟು ರೋಗದ ಲಸಿಕೆಯನ್ನು ಜಾನುವಾರುಗಳಿಗೆ ಖಾಯಿಲೆ ಕಾಣಿಸಿಕೊಂಡಿರುವ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳಿಗೆ ರೋಗ ಪ್ರತಿಬಂಧಕ…

ಗೋಬಿ ಐಸ್ ಕ್ರೀಂ ತಿನ್ನಲು ಕಿಡ್ನಾಪ್ ಕಥೆ ಹೇಳಿದ ಬಾಲಕ!

ಚಾಮರಾಜನಗರ :- ಗೋಬಿ ಮತ್ತು ಐಸ್ ಕ್ರೀಮ್ ತಿನ್ನಲು ಟ್ಯೂಷನ್ ಗೆ ಚಕ್ಕರ್ ಹಾಕಿದ್ದಬಾಲಕ ಪೋಷಕರಿಗೆ ನಿಜಾಂಶ ಮುಚ್ಚಿಡಲು ತನ್ನನ್ನು ಕಿಡ್ನಾಪ್ ಮಾಡಲಾಗಿತ್ತು ಎಂದು ಕಥೆ ಹೆಣೆದಿದ್ದು…

ಬಸಪ್ಪನದೊಡ್ಡಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಕೊಠಡಿ ಉದ್ಘಾಟಿಸಿದ ಶಾಸಕ ಎಂ.ಆರ್. ಮಂಜುನಾಥ್…

ಹನೂರು :- ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದನೇ ತರಗತಿ ಇಂಗ್ಲಿಷ್ ಮಾಧ್ಯಮ ಕೊಠಡಿ ಉದ್ಘಾಟಿಸಿ ನಂತರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಕ್ಷರ…

ಓಂ ಶಕ್ತಿ ದೇವಾಲಯದಲ್ಲಿ ಆಡಿ ಮಾಸದ ಪ್ರಯುಕ್ತ ಗಂಜಿಯನ್ನು ಸಮರ್ಪಿಸಿದ ಭಕ್ತಸಮೂಹ 

ಹನೂರು :- ಪಟ್ಟಣದಲ್ಲಿ ಶ್ರೀ ಓಂ ಶಕ್ತಿ ದೇವಾಲಯದಲ್ಲಿ ದೇವಿಗೆ ಅಲಂಕಾರ ಮಾಡಿ ವಿಶೇಷ  ಪೂಜೆ ಹಾಗೂ ಗಂಜಿಯನ್ನು ಸಮರ್ಪಿಸಲಾಯಿತು. ಓಂ ಶಕ್ತಿ ದೇವಾಲಯದಲ್ಲಿ ಆಡಿ ಮಾಸದ ಪ್ರಯುಕ್ತ…

ಹನೂರು : ಎರಡು ಹುಲಿ ಮರಿಗಳ ಸಾವು…!

ಹನೂರು :- ತಾಲೂಕಿನ ಕಾವೇರಿ ವನ್ಯಧಾಮ ವ್ಯಾಪ್ತಿಯ ಶಾಗ್ಯ ಶಾಖೆಯ ಹೊಳೆಮೂರ್ದಟ್ಟಿ ಗಸ್ತಿನ ಕಿರಬನಕಲ್ಲುಗುಡ್ಡ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳು ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಕಿಗೆ…

ಒಂದನೇ ತರಗತಿ ಬಾಲಕನಿಗೆ ಕ್ಯಾನ್ಸರ್ : ಚಿಕಿತ್ಸೆ ಕೊಡಿಸಲು ದಾನಿಗಳ ಸಹಕಾರಕ್ಕೆ ಮನವಿ…

ಹನೂರು :- ತಾಲೂಕಿನ ದೊಮ್ಮನ ಗದ್ದೆ ಗ್ರಾಮದ ಒಂದನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ಎಂಬುವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಪೋಷಕರು ಕಡು ಬಡವರಾಗಿರುವುದರಿಂದ ದಾನಿಗಳು ಸಹಕಾರ ನೀಡುವಂತೆ ಮನವಿ…

ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿದ ಶಾಸಕ ಎಂ ಆರ್ ಮಂಜುನಾಥ್..

ಹನೂರು :- ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಶಾಸಕ ಎಂ.ಆರ್. ಮಂಜುನಾಥ್ ವಿತರಿಸಿದರು. ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ‌ ಗ್ರಾಮ…